Saturday 17 March 2018

ರಾಮಚಂದ್ರ .ಕೆ.ಎಸ್




ರಾಮಚಂದ್ರ ಕರೂರು ಸೀನಪ್ಪ
    ಶ್ರೀಯುತ ರಾಮಚಂದ್ರ ಕರೂರು ಸೀಪ್ಪನವರು ಶಿವಮೊಗ್ಗ ನಗರದಲ್ಲಿ ವಾಸವಾಗಿದ್ದು ದಿನಾಂಕ ೦೪-೦೨-೧೯೭೪ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿರುತ್ತಾರೆ. ಇವರು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಜೋಗ, ಕಾರ್ಗಲ್, ಭದ್ರಾವತಿ, ತಿರ್ಥಹಳ್ಳಿಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದು ಎಂ.ಎ. ಬಿ.ಇಡಿ. ಪದವಿಧರರಾಗಿದ್ದಾರೆ. ಇವರು ದಿನಾಂಕ ೦೩-೦೧-೨೦೬ರಂದು ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸರ್ಕಾರಿ ಪ್ರೌಢಶಾಲೆ ಅತ್ತಿಹಳ್ಳಿ ಕನಕಪುರದಲ್ಲಿ ನೇಮಕಗೊಂಡು ಪ್ರಸ್ತುತ ಸರ್ಕಾರಿ ಪ್ರೌಢಶಾಲೆ ಟಿ.ಗೋಪಗೊಂಡನಹಳ್ಳಿ ನ್ಯಾಮತಿ ತಾ. ದಾವಣಗೆರೆ ಜಿಲ್ಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
     ಶ್ರೀಯುತರು ರಚನಾ ೨ ಮತ್ತು ೩ರಲ್ಲಿ ಜಿಲ್ಲಾ ಎಂ.ಆರ್.ಪಿ.ಯಾಗಿ ಕಾರ್ಯನಿರ್ವಹಿಸಿದ್ದು ಸುಗಮ ಹಾಗೂ ಜನರಲ್ ಕಾರ್ಯಗಾರದಲ್ಲಿ ಐಸಿಟಿ ಇನ್ ಕ್ಲಾಸ್ ರೂಪ್ ವಿಷಯದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಅಲ್ಲದೆ ಕೋಯರ್ನ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ.
     ರಾಮಚಂದ್ರರವರು ಪ್ರಸ್ತುತ ಕರ್ನಾಟಕ ಸರ್ಕಾರದ ವಿಶಿಷ್ಟ ಯೋಜನೆಯಾದ ಪ್ರಾಥಮಿಕ ಶಾಲಾ ಶಿಕ್ಷಕರ ಬಲವರ್ಧನೆಗಾಗಿ ರೂಪುಗೊಂಡ ’ಗುರುಚೇತನ’ ಕಾರ್ಯಕ್ರಮದಲ್ಲಿ ರಾಜ್ಯಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ’ಅಕ್ಷಾಂಶ ಮತ್ತು ರೇಖಾಂಶ’ , ’ಸಂವಿಧಾನ ಪರಿಕಲ್ಪನೆ’ ಹಾಗೂ ’ಶಿಕ್ಷಕರ ಬಲವರ್ಧನೆಯಲ್ಲಿ ಐಸಿಟಿಯ ಪಾತ್ರ’ ಮಾಡ್ಯೂಲ್ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅದರ ಅನುಷ್ಟಾನ ಕಾರ್ಯಗಾರದಲ್ಲೂ ಭಾಗವಹಿಸಿರುತ್ತಾರೆ. ಪ್ರಸ್ತುತ ’ಮಾರುತಗಳು’ ಮಾಡ್ಯೂಲ್ ನಲ್ಲಿ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
     ಇವರು ತಮ್ಮ ವೃತ್ತಿಯಲ್ಲಿ ಯಶಸ್ವಿ ಶಿಕ್ಷಕರಾಗಿ ತೊಡಗಿಕೊಂಡಿದ್ದು ಅನೇಕ ಪ್ರಶಸ್ತಿಗಳಿಗೂ ಬಾಜನರಾಗಿರುತ್ತಾರೆ. ಇವರು ೨೦೦೭ರಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆಗಾಗಿ ಮೈಕ್ರೋಸಾಪ್ಟ್ ಇಂಡಿಯಾರಿಂದ ’ITLA’ (Inovative Teachers Leadership Award) ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. ೨೦೦೮ರಲ್ಲಿ ಮೈಕ್ರೋಸಾಪ್ಟ್ ಇಂಡಿಯ ಹಾಗೂ ಯುನೆಸ್ಕೋರವರ ಸಹಯೋಗದಲ್ಲಿ ವಿಯೇಟ್ನಾಮ್ನ ರಾಜಧಾನಿ ’ಹಾನೊಯ್’ನಲ್ಲಿ ನಡೆದ ಆಸ್ಟ್ರೋ ಏಷ್ಯಾ ರೀಜಿನಲ್ ಕಾನ್ಪರೆನ್ಸ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ. ೨೦೧೬ರಲ್ಲಿ ಇವರಿಗೆ ದಾವಣಗೆರೆಯ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ ಇದೇ ವರ್ಷ ಪಬ್ಲಿಕ್ ಟಿ.ವಿ.ಯ ಪಬ್ಲಿಕ್ ಹೀರೋ ಆಗಿ ಡಿಜಿಟಲ್ ತಂಡದ ಪರವಾಗಿ ಗೌರವಿಸಲಾಗಿದೆ.

4 comments: